ಮಹಿಪಾಲರೆಡ್ಡಿ ಮುನ್ನೂರ್ ಖ್ಯಾತ ಸಾಹಿತಿಗಳೂ, ಪತ್ರಕರ್ತರೂ ಆಗಿದ್ದಾರೆ. ಗುಲ್ಬರ್ಗಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ೨೦೧೨ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಇವರು ತಮ್ಮ ಅಮ್ಮನವರ ನೆನಪಿನಲ್ಲಿ ಸ್ಥಾಪಿಸಿದ್ದ ಅಮ್ಮ ಪ್ರಶಸ್ತಿಯನ್ನು, ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ವರ್ಷ ೨೦೦೦ದಿಂದ ಕನ್ನಡದ ಸಾಹಿತ್ಯ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿರುವ ಅನೇಕ ಲೇಖಕ/ಲೇಖಕಿಯರನ್ನು ಗುರುತಿಸುತ್ತಾ, ಪ್ರಶಸ್ತಿ ನೀಡಿ ಸನ್ಮಾನಿಸುತ್ತಾ ಬಂದಿದೆ. ಈ ಪ್ರಶಸ್ತಿ ಇಂದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿ ಎಂದೂ ಗುರುತಿಸಲ್ಪಟ್ಟಿದೆ. == ಉಲ್ಲೇಖಗಳು ==